ರಾಮು ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ಅದ್ದೂರಿ ಚಿತ್ರ ಸಾಗರ್ ಈ ವಾರ ಸೆನ್ಸಾರ್ ಮುಂದೆ ಹೋಗಲಿದೆ.
೬೫ನೇ ಸ್ವಾತಂತ್ರೋತ್ಸವದ ಕೊಡುಗೆಯಾಗಿ ಚಿತ್ರವು ಬರುವ ವಾರ ತೆರೆ ಕಾಣಲಿದ್ದು, ಚಿತ್ರವು ಎಲ್ಲಾ ವರ್ಗದ ಜನರನ್ನು ರಂಜಿಸಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.
ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ, ಕೃಷ್ಣಕುಮಾರ್ ಛಾಯಾಗ್ರಹಣ, ಕವಿರಾಜ್ ಸಾಹಿತ್ಯ, ಗುರುಕಿರಣ್ ಸಂಗೀತ, ಮೋಹನ್ ಬಿ.ಕೆರೆ ಕಲೆ, ಸೌಂದರ್ರಾಜ್ ಸಂಕಲನ, ಚಿನ್ನಿ ಪ್ರಕಾಶ್, ರಾಮು ನೃತ್ಯ, ಪಳನಿರಾಜ್, ರವಿವರ್ಮ, ಕೆ.ಡಿ.ವೆಂಕಟೇಶ್ ಸಾಹಸ, ಉಮೇಶ್ಕುಮಾರ್ ನಿರ್ಮಾಣ ಮೇಲ್ವಿಚಾರಣೆ ಇದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಎಂ.ಡಿ. ಶ್ರೀಧರ್.
ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಸಂಜನ, ಹರಿಪ್ರಿಯಾ, ದೇವ್ಗಿಲ್ (ಮಗಧೀರ ಖ್ಯಾತಿ) ಅವಿನಾಶ್, ಶರತ್ ಲೋಹಿತಾಶ್ವ, ವಿನಯಪ್ರಕಾಶ್, ಸಂಗೀತಾ ಮುಂತಾದವರಿದ್ದಾರೆ.